ಹಳೆಯಂಗಡಿ: ಯುವಕರಿಂದ ಶ್ರಮದಾನ
Update: 2019-07-16 17:23 GMT
ಹಳೆಯಂಗಡಿ: ಇಂದಿರಾನಗರದಿಂದ ಹಳೆಯಂಗಡಿ ವರೆಗಿನ ಮುಖ್ಯ ರಸ್ತೆಯನ್ನು ಇಂದಿರಾನಗರದ ಯುವಕರ ತಂಡವೊಂದು ಶ್ರಮದಾನ ನಡೆಸಿ ತಾತ್ಕಾಲಿಕವಾಗಿ ರಸ್ತೆಯ ಗುಂಡಿಗಳನ್ನು ಕಲ್ಲು ಮಣ್ಣುಗಳಿಂದ ಮುಚ್ಚಿ ಸಾರ್ವಜನಿಕರಿಗೆ ಸಂಚರಿಸಲು ಅಣುವು ಮಾಡಿಕೊಟ್ಟರು.
ಆದರೆ ಈ ಸಮಸ್ಯೆಯು ಸಂಪೂರ್ಣ ಪರಿಹಾರಗೊಂಡಿಲ್ಲ ಈ ಬಗ್ಗೆ ಮುಲ್ಕಿ- ಮೂಡಬಿದ್ರೆ ಕ್ಷೇತ್ರದ ಶಾಸಕರು, ಸ್ಥಳೀಯ ಸಂಸದರೂ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಶೀಘ್ರ ಸಮಸ್ಯೆ ಪರಿಹರಿಸಬೇಕಿದೆ ಎಂದು ಯುಕರ ತಂಡ ತಿಳಿಸಿದೆ.