ಉಜಿರೆಬೆಟ್ಟು ಅಂಗನವಾಡಿ ಕೇಂದ್ರದ ಹೊರಾಂಗಣ ಉದ್ಘಾಟನೆ

Update: 2019-07-17 08:14 GMT

ಬೆಳ್ತಂಗಡಿ, ಜು 17: ದ.ಕ. ಜಿಲ್ಲಾ ಪಂಚಾಯತ್ ಅನುದಾನ ಹಾಗೂ ದಾನಿಗಳ ಮತ್ತು ಪೋಷಕರ ಸಹಕಾರದಿಂದ ಉಜಿರೆಬೆಟ್ಟು  ಅಂಗನವಾಡಿ ಕೇಂದ್ರದ ಹೊರಾಂಗಣವನ್ನು ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯ ಕೆ.ಕೆ.ಶಾಹುಲ್ ಹಮೀದ್  ಇತ್ತೀಚೆಗೆ ಉದ್ಘಾಟಿಸಿದರು.

ತಣ್ಣೀರು ಪಂಚಾಯತ್ ಅಧ್ಯಕ್ಷ ಜಯ ವಿಕ್ರಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕರಾದ ನಂದನಾ ಕುಮಾರಿ, ತಣ್ಣೀರುಪಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಹಾಗೂ ಪಂಚಾಯತ್ ಸದಸ್ಯರಾದ ಸೂರಪ್ಪ ಬಂಗೇರ ಹಾಗೂ ಆದಂ ಕಲ್ಲೇರಿ, ಬಾಲವಿಕಾಸ ಸಮಿತಿ ಸದಸ್ಯರುಗಳು ಅಂಗನವಾಡಿ ಸಹಾಯಕಿ ಕಾರ್ಯಕರ್ತೆ, ಪೋಷಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಟ್ಟಡ ವಿಸ್ತೀರ್ಣಕ್ಕೆ ಸಹಾಯ ಸಹಕಾರ ನೀಡಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಕೆ.ಶಾಹುಲ್ ಹಮೀದ್ ಹಾಗೂ ದಾನಿಗಳನ್ನು ಸನ್ಮಾನಿಸುವ ಮೂಲಕ ಅಭಿನಂದಿಸಲಾಯಿತು.

ಅಂಗನವಾಡಿ ಬಾಲವಿಕಾಸ ಸಂಸ್ಥೆಯ ಸದಸ್ಯರಾದ ಅಬ್ದುಲ್  ಖಾದರ್ ಹಾಜಿ ಉಜಿರೆಬೆಟ್ಟು ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಅನುರಾಧ  ವಂದಿಸಿ, ಕಿರಿಯ ಪ್ರಾಥಮಿಕ ಕೇಂದ್ರದ ಮುಖ್ಯೋಪಾಧ್ಯಯರಾದ ಕೃಷ್ಣಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News