ಜು.21: ಕಲ್ಲಡ್ಕ ಟಿಕ್ಕಾ ಪೋಯಿಂಟ್ ವತಿಯಿಂದ ರಕ್ತದಾನ ಶಿಬಿರ

Update: 2019-07-17 17:31 GMT

ವಿಟ್ಲ : ಕಲ್ಲಡ್ಕದ ಟಿಕ್ಕಾ ಪೋಯಿಂಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ ಜು. 21ರಂದು ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮವು ಕಲ್ಲಡ್ಕ ಪ್ರೀತಿ ಕಾಂಪ್ಲೆಕ್ಸ್ ಬಳಿಯ ಗಂಗಾಧರ ಸಂಕೀರ್ಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಶೇಖ್ ಮುಹಮ್ಮದ್ ಫೈಝಿ ಇರ್ಫಾನಿ ಉದ್ಘಾಟಿಸಲಿದ್ದು, ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅದ್ಯಕ್ಷ ಕೆ.ಪದ್ಮನಾಭ ರೈ ಅಧ್ಯಕ್ಷತೆ ವಹಿಸುವರು.

ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ್, ಉದ್ಯಮಿಗಳಾದ ಹಾಜಿ ಜಿ ಯೂಸುಫ್ ಗೋಳ್ತಮಜಲು, ಶಾಂತರಾಮ ಶೆಟ್ಟಿ ಪ್ರೀತಿ ಕಾಂಪ್ಲೆಕ್ಸ್, ಉಪನ್ಯಾಸಕ ಅಬ್ದುಲ್ ರಝಾಕ್ ಮಾಸ್ಟರ್, ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷ ಹಾಜಿ.ಕೆ.ಎಸ್.ಮುಸ್ತಫಾ, ಸದಸ್ಯ ಯೂಸುಫ್ ಹೈದರ್,ಪ್ರಮುಖರಾದ  ಸಿದ್ದೀಕ್ ಮಂಜೇಶ್ವರ, ಕೆ.ಎನ್.ನವಾಝ್ ಕಲ್ಲಡ್ಕ, ಇಂಜಿನಿಯರ್ ಇಮ್ರಾನ್ ಕಲ್ಲಡ್ಕ, ಜಿ.ಎಸ್.ಸಿದ್ದೀಕ್ ಫ್ಯಾಶನ್ ಫ್ರೈಡ್, ರಫೀಕ್ ಮಾಸ್ಟರ್, ಸಜ್ಜಾದ್ ಝಮಾನ್ ಕಲ್ಲಡ್ಕ, ಜೆ.ಕೆ.ಜವಾಝ್ ಕಲ್ಲಡ್ಕ, ಫಾರೂಕ್ ಬಿಗ್ ಗ್ಯಾರೇಜ್, ಅಫ್ರಿದ್ ಮಿಲಾದ್‌‌‌ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಇದೇ ವೇಳೆ ನಿರಂತರವಾಗಿ ಹಲವಾರು ಭಾರಿ ರಕ್ತದಾನ ಮಾಡಿದ ರಕ್ತದಾನಿ ಹಕೀಂ ಕಲ್ಲಡ್ಕ ಹಾಗೂ ಕಲ್ಲಡ್ಕದ ರಕ್ತದಾನಿಗಳಾದ ಏಳು ಮಂದಿ ಸಹೋದರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಟಿಕ್ಕಾ ಪೋಯಿಂಟ್ ನ ಫಾರೂಕ್ ಝೈದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News