ಬೆಳ್ತಂಗಡಿ: ವಿದ್ಯುತ್ ಆಘಾತಕ್ಕೆ ಮಹಿಳೆ ಬಲಿ

Update: 2019-07-18 06:02 GMT

ಬೆಳ್ತಂಗಡಿ, ಜು.18: ವಿದ್ಯುತ್ ಆಘಾತಗೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ಎಂಬಲ್ಲಿ ಬುಧವಾರ ಮಧ್ಯರಾತ್ರಿ 12:30ರ ಸುಮಾರಿಗೆ ನಡೆದಿದೆ.

ರೆಂಕೆದಗುತ್ತು ನಿವಾಸಿ ದಿ.ಸಂಜೀವ ಎಂಬವರ ಪತ್ನಿ ಸುಂದರಿ (55) ಮೃತಪಟ್ಟವರು. ಮಧ್ಯರಾತ್ರಿ 12:30ರ ಸುಮಾರಿಗೆ ಹಟ್ಟಿಯಲ್ಲಿ ದನ, ಕರುಗಳ ಜೋರಾಗಿ ಕೂಗಿಕೊಂಡಿದ್ದವೆನ್ನಲಾಗಿದೆ. ಈ ಸಂದರ್ಭ ಏನೆಂದು ಗಮನಿಸಲು ಸುಂದರಿ ಹಟ್ಟಿಗೆ ತೆರಳಿದಾಗ ಈ ಅವಘಡ ಸಂಭವಿಸಿದೆ. ಹಟ್ಟಿಗೆ ಅಳವಡಿಸಿದ್ದ ವಿದ್ಯುತ್ ವಯರ್ ನಿಂದ ಕಬ್ಬಿಣದ ಕಂಬಕ್ಕೆ ವಿದ್ಯುತ್ ಪ್ರವಹಿಸಿ ಈ ಘಟನೆ ಸಂಭವಿಸಿದೆ ಎಂದು ಅನುಮಾನಿಸಲಾಗಿದೆ.

ವಿದ್ಯುತ್ ಪ್ರವಹಿಸುತ್ತಿದ್ದ ಕಬ್ಬಿಣದ ಕಂಬವನ್ನು ಸುಂದರಿಯವರು ಸ್ಪರ್ಶಿಸಿದ್ದರಿಂದ ಶಾಕ್ ಗೆ ಒಳಗಾಗಿದ್ದಾರೆ. ಸುಂದರಿಯವರ ಬೊಬ್ಬೆ ಕೇಳಿ ಮನೆಯೊಳಗಿದ್ದ ಅವರ ಪುತ್ರ ರಮೇಶ್ ಓಡಿ ಬಂದು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭ ರಮೇಶಗೂ ವಿದ್ಯುತ್ ಆಘಾತವಾಗಿದೆ. ಕೂಡಲೇ ಸುಂದರಿ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾದರೂ ಅಗಲೇ ಅವರು ಮೃತಪಟ್ಟಿದ್ದರು.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಹಾಗೂ ಮೆಸ್ಕಾಂ ಎಇಇ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News