ಯಲಹಂಕ ತ್ಯಾಜ್ಯ ಸಂಸ್ಕರಣ, ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶಾಸಕ ನಾಯ್ಕ್ ಭೇಟಿ

Update: 2019-07-18 12:45 GMT

ಬಂಟ್ವಾಳ, ಜು. 18: ಪ್ರಸ್ತುತ ರಾಜಕೀಯ ಗೊಂದಲದ ನಡುವೆಯು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ರಾಜನುಕುಂಟೆ ಗ್ರಾಮ ಪಂಚಾಯತ್‍ನ ತ್ಯಾಜ್ಯ ಸಂಸ್ಕರಣ ಮತ್ತು ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದರು.

ಬಂಟ್ವಾಳ ಪುರಸಭೆಯ ಗಂಭೀರ ಸಮಸ್ಯೆಯಲ್ಲೊಂದಾದ ಘನ ತ್ಯಾಜ್ಯ ವಿಲೇವಾರಿಗೊಂದು ಅಂತಿಮ ಪರಿಹಾರ ಕಂಡುಕೊಳ್ಳುವ ದೆಸೆಯಲ್ಲಿ ಶಾಸಕರು ರಾಜನುಕುಂಟೆ ಗ್ರಾಮ ಪಂಚಾಯತ್ ಅನುಷ್ಠಾನಕ್ಕೆ ತಂದಿರುವ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಪಂಚಾಯತ್ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.

ರಾಜನುಕುಂಟೆ ಗ್ರಾಮ ಪಂಚಾಯತ್ ಸದಸ್ಯರ ಸೃಜನಾತ್ಮಕ ಚಟುವಟಿಕೆಯಲ್ಲಿ ಅನುಷ್ಠಾನಕ್ಕೆ ಬಂದಿರುವ ಕಸದಿಂದ ರಸ ತ್ಯಾಜ್ಯ ನಿರ್ವಹಣಾ ಘಟಕದಿಂದಾಗಬಹುದಾದ ಸಾಧಕ, ಬಾಧಕಗಳ ಬಗ್ಗೆಯು ಅಲ್ಲಿನ ಪಂಚಾಯತ್ ಸದಸ್ಯರಿಂದ ವಿವರಣೆ ಪಡೆದುಕೊಂಡರು.

ತ್ಯಾಜ್ಯ ನಿರ್ವಹಣೆ ಮತ್ತು ಕಸದಿಂದ ರಸ ತೆಗೆಯವಂತ ಪಂಚಾಯತ್‍ನ ಈ ವ್ಯವಸ್ಥೆಯನ್ನು ಶಾಸಕ ರಾಜೇಶ್ ನಾಯ್ಕ್, ಶ್ಲಾಘಿಸಿದರಲ್ಲದೆ ಬಂಟ್ವಾಳ ಪುರಸಭೆಯಲ್ಲು ಈ ಮಾದರಿಯ ತ್ಯಾಜ್ಯ ಸಂಸ್ಕರಣ ಮತ್ತು ಕಸದಿಂದ ರಸ ನಿರ್ವಹಣಾ ಘಟಕ ಕಾರ್ಯರೂಪಕ್ಕೆ ತರಲು ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಸ, ತ್ಯಾಜ್ಯ ವಸ್ತುಗಳನ್ನು ರಸ್ತೆಯ ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ತ್ಯಾಜ್ಯ ವಿಲೇವಾರಿ ಕೂಡ ಅಸಮ ರ್ಪಕವಾಗಿದೆ. ಘನತ್ಯಾಜ್ಯ ವಿಲೇವಾರಿ ಸಂಬಂಧಿಸಿ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆಗಳು ಮಾತ್ರ ನಡೆಯುತ್ತಿತ್ತು ಹೊರತು ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News