ಉಡುಪಿ: ಬಳಕೆದಾರರ ವೇದಿಕೆಯಲ್ಲಿ ಬಜೆಟ್ ಚರ್ಚೆ
Update: 2019-07-18 14:37 GMT
ಉಡುಪಿ, ಜು.18: 2019-20ನೇ ಸಾಲಿನ ಕೇಂದ್ರ ವಾರ್ಷಿಕ ಆಯವ್ಯಯ ಪಟ್ಟಿ (ಬಜೆಟ್) ಕುರಿತು ಮಾಹಿತಿ ನೀಡುವ ಹಾಗೂ ಗ್ರಾಹಕರ ಜತೆ ಮುಖಾಮುಖಿ/ಸಂವಾದ ನಡೆಸುವ ಕಾರ್ಯಕ್ರಮವೊಂದನ್ನು ಜು.22ರ ಸಂಜೆ 4 ಗಂಟೆಗೆ ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಉಡುಪಿಯ ನಾರ್ತ್ ಶಾಲಾ ಆವರಣದಲ್ಲಿರುವ ಉಡುಪಿ ಬಳಕೆದಾರರ ವೇದಿಕೆಯ ಸಭಾಂಗಣದಲ್ಲಿ ಉಡುಪಿಯ ಖ್ಯಾತ ಲೆಕ್ಕಪರಿಶೋಧಕರಾದ ವೈ.ಗಣೇಶ ರಾವ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಆಸಕ್ತರೆಲ್ಲರು ಇದರಲ್ಲಿ ಭಾಗವಹಿಸುವಂತೆ ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.