ಕರುವಿನ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ ಹಲ್ಲೆಗೈದ ಮೂವರ ಸೆರೆ

Update: 2019-07-18 15:08 GMT

ಮಂಗಳೂರು, ಜು.18: ನಗರದ ಕಾವೂರಿನ ಕುಂಜತ್ತ್‌ಬೈಲ್ ಬಳಿ ಯುವಕನೊಬ್ಬ ಕರುವಿನ ಮೇಲೆ ಅಸ್ವಾಭಾವಿಕ ಅತ್ಯಾಚಾರ ನಡೆಸಿದ್ದಾನೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸರು ಸ್ವಯಂಪ್ರೇರಿತವಾಗಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಲೈಂಗಿಕ ಕ್ರಿಯೆ ಆರೋಪದಡಿ ಜಾರ್ಖಂಡ್ ಮೂಲದ ಮುಹಮ್ಮದ್ ಅನ್ಸಾರಿ ಎಂಬಾತನ ವಿರುದ್ಧ ಕೇಸು ದಾಖಲಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಅಭಿ, ಸುಶಾಂತ್ ಮತ್ತು ಪ್ರಜ್ವಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ಮೇಯಲು ಕಟ್ಟಿದ್ದ ಕರುವಿಗೆ ಅನ್ಸಾರಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಎಂದು ಸ್ಥಳೀಯರು ಆತನಿಗೆ ಹಲ್ಲೆ ಮಾಡುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೊದಲ್ಲಿ ಪರಸ್ಪರ ತುಳು ಭಾಷೆಯಲ್ಲಿ ಮಾತನಾಡುವುದು ಸ್ಪಷ್ಟವಾಗುತ್ತಿತ್ತು.

ಸ್ವಯಂಪ್ರೇರಿತ ಪ್ರಕರಣ: ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆ ಕಾವೂರು ಪೊಲೀಸರು ದೂರು ದಾಖಲಿಸಿ, ತನಿಖೆ ನಡೆಸಿದರು. ಬಳಿಕ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News