21ರಂದು ದಸಂಸ ಸಂಸ್ಥಾಪಕ ಕೃಷ್ಣಪ್ಪ ಜನ್ಮದಿನಾಚರಣೆ
ಮಂಗಳೂರು, ಜು. 19: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಶಾಖೆ ಹಾಗೂ ವಿವಿಧ ತಾಲೂಕು ಶಾಖೆಗಳ ವತಿಯಿಂದ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪರ ಜನ್ಮ ದಿನಾಚರಣೆ ಜು. 21ರಂದು ಬೆಳಗ್ಗೆ 11 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಹಂಪನಕಟ್ಟೆ ಕುನಿಲ್ ಸೆಂಟರ್ನ 3ನೇ ಮಹಡಿಯಲ್ಲಿರುವ ನೂತನ ಜಿಲ್ಲಾ ಶಾಖೆಯ ಕಚೇರಿ ಉದ್ಘಾಟನೆಯನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ನೆರವೇರಿಸುವರು. ಸಚಿವ ಯು.ಟಿ.ಖಾದರ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಎಸ್ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್, ದಸಂಸ ಮುಖಂಡರಾದ ಚಂದು ಎಲ್., ಇಂದಿರಾ ಕೃಷ್ಣಪ್ಪ, ಮಲ್ಲೇಶ್ ಅಂಬುಗ, ಬಿ.ಕೆ.ವಸಂತ್ ಮೊದಲಾದವರು ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸದಾಶಿವ ಉರ್ವಸ್ಟೋರ್, ಗಂಗಾಧರ ಅದ್ಯಪಾಡಿ, ಸುನಿಲ್ ಅದ್ಯಪಾಡಿ ಉಪಸ್ಥಿತರಿದ್ದರು.