ಬಿಕರ್ನಕಟ್ಟೆ: ಯುವಕ ನಾಪತ್ತೆ

Update: 2019-07-19 16:24 GMT

ಮಂಗಳೂರು, ಜು.19: ಬಿಕರ್ನಕಟ್ಟೆ ನಿವಾಸಿ ಶ್ರೀಧರ್ (31) ಎಂಬವರು ಜು.18ರಂದು ಸ್ಕೂಟರ್ ಜತೆ ಹೊರಗೆ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.

ಶ್ರೀಧರ್ ಅವರು ಮದ್ಯ ಸೇವಿಸುವ ಅಭ್ಯಾಸದವರಾಗಿದ್ದು, ಜು.18ರಂದು ಪತ್ನಿ ಜತೆ ವಿನಾಕಾರಣ ಗಲಾಟೆ ಮಾಡಿದ್ದಾರೆ. ಆ ಬಳಿಕ ಕುಡಿಯಲು ಹಣ ಕೇಳಿ ತಗಾದೆ ತೆಗೆದಿದ್ದು, ಕೊಡದಿದ್ದಾಗ ಮಧ್ಯಾಹ್ನ 3:30ಕ್ಕೆ ಸ್ಕೂಟರ್ ಸಹಿತ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News