ಉಡುಪಿ: ಜು.21ರಂದು ದತ್ತಿ ಉಪನ್ಯಾಸ
Update: 2019-07-19 16:45 GMT
ಉಡುಪಿ, ಜು.19: ಉಡುಪಿಯ ಆರ್.ವಿ.ಎಸ್. ಸಂಘದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮ ಪಾಲಕ, ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶಕರಾಗಿದ್ದ ಉ.ಕಾ.ಸುಬ್ಬರಾಯ ಆಚಾರ್ಯರ ಸಂಸ್ಮರಣೆ ಜು.21ರಂದು ಮಧ್ಯಾಹ್ನ 12 ಗಂಟೆಗೆ ಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಲಿದೆ.
ಮುರ್ಡೇಶ್ವರ ಆರ್ಎಂ ಶೆಟ್ಟಿ ಪಾಲಿಟೆಕ್ನಿಕ್ನ ಉಪನ್ಯಾಸಕ ದಿನೇಶ್ ಆಚಾರ್ಯ ದತ್ತಿ ಉಪನ್ಯಾಸ ನೀಡಲಿರುವರು. ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಅಧ್ಯಕ್ಷತೆ ವಹಿಸಲಿರುವರು. ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಸಹಾಯಕ ಕಾಳಪ್ಪಬಡಿಗೇರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿ ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.