ಬೈಂದೂರು: ವ್ಯಕ್ತಿ ನಾಪತ್ತೆ

Update: 2019-07-21 15:46 GMT

ಬೈಂದೂರು, ಜು.21: ಕೆರ್ಗಾಲ್ ಬಸವನಬೆಟ್ಟು ನಿವಾಸಿ ಸುಬ್ಬ ಯಾನೆ ಸುಭಾಷ್(50) ಎಂಬವರು ಜು.19ರಂದು ಸಂಜೆ ವೇಳೆ ಮನೆಯಿಂದ ಪೇಟೆಗೆ ಮದ್ಯಪಾನ ಸೇವಿಸಲು ಹೋದವರು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

5.3 ಅಡಿ ಎತ್ತರ, ಕಪ್ಪುಮೈ ಬಣ್ಣ, ಸಪೂರ ಶರೀರ ಹೊಂದಿರುವ ಇವರು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಬಲಕಥ ತೋಳಿನಲ್ಲಿ ಸುಟ್ಟ ಗಾಯದ ಗುರುತು ಇರುತ್ತದೆ. ನಸು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News