ಚೆಕ್ ಬೌನ್ಸ್ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2019-07-21 18:07 GMT

ಪುತ್ತೂರು: ಚೆಕ್ ಬೌನ್ಸ್ ವಿಚಾರದ ಎರಡು ಪ್ರತ್ಯೇಕ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ನಗರದ ಬೊಳುವಾರು ನಿವಾಸಿ ವೇಣುಗೋಪಾಲ ಮತ್ತು ಕಲ್ಲಾರೆ ನಿವಾಸಿ ತೀರ್ಥಾನಂದ ಬಂಧಿತ ಆರೋಪಿಗಳು. ವೇಣುಗೋಪಾಲ ಅವರು ನ್ಯಾಯವಾದಿ ಮಹಾಬಲ ಗೌಡ ಎಂಬವರಿಗೆ ನೀಡಿದ ಚೆಕ್‍ಗೆ ಸಂಬಂಧಿಸಿ ಕೋರ್ಟು ಕೇಸು ನಡೆಯುತ್ತಿದ್ದು, ವಿಚಾರಣೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ವೇಣುಗೋಪಾಲ ಅವರ ಮೇಲೆ ವಾರಂಟ್ ಜಾರಿ ಮಾಡಿತ್ತು. 

ಇನ್ನೊಂದು ಪ್ರಕರಣದಲ್ಲಿ ತೀರ್ಥಾನಂದ ಎಂಬವರು ನವಚೇತನ ಚಿಟ್ ಪಂಡ್‍ಗೆ ಚೆಕ್ ನೀಡಿದ ಚೆಕ್‍ಗೆ ಸಂಬಂಧಿಸಿ ಕೋರ್ಟು ಕೇಸು ನಡೆಯುತ್ತಿದ್ದು, ವಿಚಾರಣೆ ಹಾಜರಾಗದೆ ತಲೆಮೆರೆಸಿಕೊಂಡಿದ್ದರು. ಅವರ ಮೇಲೂ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಪೊಲೀಸರು ಇಬ್ಬರು ಆರೋಪಿಗಳನ್ನು ಜು.21ರಂದು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News