'ಕಡಲೂರಿನ ಲೇಖಕರು' ಸಂಘಟನೆಯ ಅಧ್ಯಕ್ಷರಾಗಿ ಜೆಸ್ಸಿ ಪಿ.ವಿ

Update: 2019-07-21 18:12 GMT
ಜೆಸ್ಸಿ ಪಿ.ವಿ, ಸಫ್ವಾನ್ ಸವಣೂರು

ಪುತ್ತೂರು: ಬರಹಗಾರರ ಮತ್ತು ಸಾಹಿತ್ಯಾಸಕ್ತರ ನೂತನ ಸಂಘಟನೆಯಾದ 'ಕಡಲೂರಿನ ಲೇಖಕರು' ಇದರ ಅಧ್ಯಕ್ಷರಾಗಿ ಲೇಖಕಿ ಜೆಸ್ಸಿ ಪಿ.ವಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಫ್ವಾನ್ ಸವಣೂರು ಆಯ್ಕೆಯಾಗಿದ್ದಾರೆ. 

ಸಂಘಟನೆಯ ಸಭೆಯು ಪುತ್ತೂರಿನ ಡಾ.ಶಿವರಾಮ ಕಾರಂತರ ಬಾಲವನದ ಬಯಲು ರಂಗ ಮಂದಿರದಲ್ಲಿ ರಂಗಕರ್ಮಿ ಕೃಷ್ಣಪ್ಪ ಬಂಬಿಲ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಉಪಾಧ್ಯಕ್ಷರಾಗಿ ಕೃಷ್ಣಪ್ಪ ಬಂಬಿಲ, ಜೊತೆ ಕಾರ್ಯದರ್ಶಿಯಾಗಿ ನಳಿನಿ ಡಿ, ಕೋಶಾಧಿಕಾರಿಯಾಗಿ ನಾರಾಯಣ ಕಳ್ವಾಜೆ. ಸದಸ್ಯರಾಗಿ ಅಬೂಬಕ್ಕರ್ ಸಿದ್ದೀಕ್ ವಳಾಲು, ಇಂದಿರಾ ಪಿ, ಹಸೀನಾ ಫರ್ವೀನ್, ಕವಿತಾ ಸುಳ್ಯ, ಆಸಿಫ್ ಮಾಡಾವು, ಹರೀಣಾಕ್ಷಿ ಕೆ, ಇಬ್ರಾಹಿಂ ಖಲೀಲ್, ಮಲ್ಲಿಕಾ ಗೋಪಾಲ್, ಅಝೀಝ್ ಮಾಡಾವು ಆಯ್ಕೆಯಾದರು. 

ಜೆಸ್ಸಿ ಪಿ.ವಿ ಸ್ವಾಗತಿಸಿದರು. ಸಫ್ವಾನ್ ಸವಣೂರು ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News