ತೋಡಿನ ನೀರಿಗೆ ಬಿದ್ದು ಮೃತ್ಯು

Update: 2019-07-22 16:13 GMT

ಬೈಂದೂರು, ಜು.22: ವಿಪರೀತ ಗಾಳಿ ಮಳೆಯಿಂದ ವ್ಯಕ್ತಿಯೊಬ್ಬರು ಕಾಲು ಜಾರಿ ತೋಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಂದನವನ ಗ್ರಾಮದ ಕೆರ್ಗಾಲ್ ಬಸವನಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಬಸವನಬೆಟ್ಟು ನಿವಾಸಿ ಸುಬ್ಬ ಯಾನೆ ಸುಭಾಷ್(50) ಎಂದು ಗುರುತಿಸಲಾಗಿದೆ. ಇವರು ಜು.19ರಂದು ಸಂಜೆ ಮನೆಯಿಂದ ಪೇಟೆಗೆ ಹೋದವರು ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದರು. ಜು.21ರಂದು ಸಂಜೆ ಇವರ ಮೃತದೇಹ ನಂ ದನವನ ತೋಡಿನ ಬಳಿ ಪತ್ತೆಯಾಗಿದೆ. ಇವರು ಪೇಟೆಗೆ ಹೋಗಿ ವಾಪಾಸ್ಸು ಮನೆಗೆ ಬರುತ್ತಿರುವಾಗ ವಿಪರೀತ ಗಾಳಿ ಮಳೆಯಿಂದ ಕಾಲು ಜಾರಿ ತೋಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿ ದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News