ಮಂಜೇಶ್ವರ ಪ್ರೆಸ್ ಕ್ಲಬ್ : 2019-20 ನೇ ಸಾಲಿಗೆ ನೂತನ ಸಾರಥಿಗಳ ಆಯ್ಕೆ

Update: 2019-07-23 09:50 GMT
ರಹ್ಮಾನ್ ಉದ್ಯಾವರ - ಆರಿಫ್ ಮಚ್ಚಂಪ್ಪಾಡಿ

ಮಂಜೇಶ್ವರ: ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ಐಜೆಯು) ನ ಕೇರಳ ಘಟಕವಾದ ಕೇರಳ ಜರ್ನಲಿಸ್ಟ್ ಯೂನಿಯನ್ (ಕೆಜೆಯು) ನ ಅಧೀನದಲ್ಲಿರುವ ಮಂಜೇಶ್ವರ ಪ್ರೆಸ್ ಕ್ಲಬ್ ನ 2019-20ನೇ ಸಾಲಿಗೆ ನೂತನ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಹ್ಮಾನ್ ಉದ್ಯಾವರ (ಕರಾವಳಿ ಅಲೆ) ಪ್ರ. ಕಾರ್ಯದರ್ಶಿಯಾಗಿ ಆರಿಫ್ ಮಚ್ಚಂಪ್ಪಾಡಿ, ಕೋಶಾಧಿಕಾರಿಯಾಗಿ ಸನಲ್ ಕುಮಾರ್ (ಮಾತೃ ಭೂಮಿ ಮಲಯಾಳಂ) ಉಪಾಧ್ಯಕ್ಷರುಗಳಾಗಿ ರವೀಂದ್ರ ಪ್ರತಾಪ ನಗರ (ಹೊಸ ದಿಗಂತ) ಅಬ್ದುಲ್ ರಹ್ಮಾನ್ ಪಾರಕಟ್ಟ (ಮಲಯಾಳ ಮನೋರಮ), ಜೊತೆ ಕಾರ್ಯದರ್ಶಿಗಳಾಗಿ ರತನ್ ಕುಮಾರ್ (ಕಾರವಲ್), ಸಲಾಂ ವರ್ಕಾಡಿ (ವಿಜಯ ಕಿರಣ) ಎಂಬಿವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನೀಸ್ ಉಪ್ಪಳ (ಮಾಧ್ಯಮಂ), ಹರ್ಷಾದ್ ವರ್ಕಾಡಿ (ಉದಯವಾಣಿ), ಸಾಯಿ ಭದ್ರಾ ರೈ (ವಿಜಯ ಕರ್ನಾಟಕ) ಎಂಬಿವರನ್ನು ಆಯ್ಕೆ ಮಾಡಲಾಯಿತು.

ಸಭೆಯನ್ನು ಹನೀಸ್ ಉಪ್ಪಳ ಉದ್ಘಾಟಿಸಿದರು. ಹರ್ಷಾದ್ ವರ್ಕಾಡಿ ಸ್ವಾಗತಿಸಿ ಸಾಯಿಭದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News