ಕುಂದಾಪುರ: ಯಂಗ್ ಮುಸ್ಲಿಮ್ ವೆಲ್ಫೇರ್ ಅಸೋಶಿಯೇಷನ್‌ ಕಚೇರಿ ಉದ್ಘಾಟನೆ

Update: 2019-07-23 11:54 GMT

ಕುಂದಾಪುರ : ಯಂಗ್ ಮುಸ್ಲಿಮ್ ವೆಲ್ಫೇರ್ ಅಸೋಶಿಯೇಷನ್‌ನ ನೂತನ ಕಚೇರಿಯನ್ನು ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿದ್ದ ಸೌಹಾರ್ದ ಭವನ ಕಟ್ಟಡದಲ್ಲಿ ಮುಹಮ್ಮದ್ ಅಶ್ರಫ್ ಬ್ಯಾರಿ ಉದ್ಘಾಟಿಸಿದರು.

ಬಳಿಕ ನಡೆದ ಸಂಸ್ಥೆಯ ವಾರ್ಷಿಕ ಮಹಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ನುಸ್ರತುಲ್ ಮಸಾಕಿನ್ ಅಸೋಶಿಯೇಷನ್ ಕುಂದಾಪುರ ತಾಲೂಕು ಸೌದಿ ಅರೇಬಿಯಾ ಇದರ ಕೇಂದ್ರ ಸಮಿತಿಯ ಅಧ್ಯಕ್ಷ ಅಬೂಬಕರ್ ಮುಹಮ್ಮದ್ ಅಲಿ ಹಾಗೂ ಸ್ಥಳೀಯ ಕೌನ್ಸಿಲರ್ ಅಶ್ಫಾಕ್ ಮತ್ತು ಕೆ.ಎಚ್. ಇಬ್ರಾಹೀಂ ಉಪಸ್ಥಿತರಿದ್ದರು.

ಸಭೆಯಲ್ಲಿ 2019-20ನೇ ಸಾಲಿನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ಬ್ಯಾರಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಕೋಟೆ ಅಬ್ದುಲ್ಲಾ, ಉಪಾಧ್ಯಕ್ಷರಾಗಿ ಮುಹಮ್ಮದ್ ಅಲಿ (ಕುಂಞಿ ಮೋನು), ಕೆ.ಎಮ್. ಹಸೈನಾರ್, ಸಂಚಾಲಕರಾಗಿ ಅಬ್ದುರ್ರಹ್ಮಾನ್ ಎಮ್. ಕೋಡಿ., ಕೋಟೆ ಯೂಸುಫ್ ಮೋನು, ಲೆಕ್ಕ ಪರಿಶೋಧಕರಾಗಿ ಯೂಸುಫ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್. ರಿಯಾಝ್, ಜೊತೆ ಕಾರ್ಯದರ್ಶಿಯಾಗಿ ಅಬುರ್ರವೂಫ್ ಕೋಡಿ, ಖಜಾಂಚಿಯಾಗಿ ಮುಹಮ್ಮದ್ ಎಚ್.ಬಿ. ಆಯ್ಕೆಯಾದರು.

ಯೂಸುಫ್ ಕೋಡಿ ಸ್ವಾಗತಿಸಿ, ವಂದಿಸಿದರು. ಸಿದ್ದೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News