ಎರ್ಮಾಳಿನಲ್ಲಿ ಕಡಲ್ಕೊರೆತ: ಮನೆಗೆ ಹಾನಿ

Update: 2019-07-23 16:00 GMT

ಕಾಪು: ಎರ್ಮಾಳಿನಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಉಳಿಯರಗೋಳಿಯಲ್ಲಿ ಮನೆಗೆ ಹಾನಿಯಾಗಿದೆ. 

ಕಾಪುವಿನ ಉಳಿಯರಗೋಳಿಯ ನಿವಾಸಿ ಶಕುಂತಲಾ ಎಂಬವರ ವಾಸದ ಮನೆಯ ಗೋಡೆ ಭಾಗಶಃ ಹಾನಿಯಾಗಿದ್ದು, ಒಟ್ಟು 70 ಸಾವಿರ ರೂ. ನಷ್ಟ ಉಂಟಾಗಿದೆ. ತೀವ್ರ ಮಳೆಗೆ ಕಾರಣದಿಂದ ಪಡುಬಿದ್ರಿಯ ಉರ್ದು ಶಾಲೆಯಲ್ಲಿ ಪಡುಬಿದ್ರಿ ವೃತ್ತ ಮಟ್ಟದ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟವನ್ನು ಶಾಲೆಯ ರಜೆ ಹಿನ್ನಲೆಯಲ್ಲಿ ಪಂದ್ಯಾಟವನ್ನು ಮುಂದೂಡಲಾಗಿದೆ. 

ಕಡಲ್ಕೊರೆತಳ ಎರ್ಮಾಳು ತೆಂಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲ ತೀರದಲ್ಲಿ ಮಂಗಳವಾರದಿಂದ ಕಡಲ್ಕೊರೆತ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಕಡಲ್ಕೊರೆತಕ್ಕೆ ಹಾಕಲಾದ ಕಲ್ಲುಗಳು ಸಮುದ್ರದ ಪಾಲಾಗುವ ಭೀತಿಯಲ್ಲಿದೆ. ಪಡುಬಿದ್ರಿಯ ಪ್ರಕೃತಿಯ ಬಳಿ ಕಡಲ್ಕೊರೆತ ಕಾಣಿಸಿಕೊಂಡಿದೆ. ಯಾವುದೇ ಹಾನಿಯಾಗಿಲ್ಲ.  ಪಡುಬಿದ್ರಿ ಬೀಚ್ ಪರಿಸರದಲ್ಲೀ ಕಡಲ್ಕೊರೆತ ಭೀತಿ ಉಂಟಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News