ಮಂಗಳೂರು: ಉದ್ಯಮಿ ಅಬ್ದುಲ್ ಹಮೀದ್ ನಿಧನ
Update: 2019-07-23 16:36 GMT
ಮಂಗಳೂರು, ಜು. 23: ನಗರದ ಟಿಂಬರ್ ಉದ್ಯಮಿ, ದಿ. ಅಬ್ದುಲ್ ಖಾದರ್ ಮುಹಮ್ಮದ್ ಅಬೂಬಕರ್ ಅವರ ಪುತ್ರ ಎ. ಅಬ್ದುಲ್ ಹಮೀದ್(69) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.
ಕಂಕನಾಡಿಯ ಬಾಲಿಕಾಶ್ರಮ ರಸ್ತೆಯ ಅಪಾರ್ಟ್ಮೆಂಟ್ವೊಂದರ ನಿವಾಸಿಯಾಗಿದ್ದ ಅಬ್ದುಲ್ ಹಮೀದ್, ಹಲವು ವರ್ಷಗಳಿಂದ ಟಿಂಬರ್ ವ್ಯಾಪಾರದಲ್ಲಿ ತೊಡಿಸಿಕೊಂಡಿದ್ದರು.
ಮೃತರು ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಬಂದರ್ನ ಝೀನತ್ ಬಕ್ಷ್ ಮಸೀದಿ ವಠಾರದಲ್ಲಿ ಬುಧವಾರ (ಜು.24) ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.