ಗಾಂಜಾ ಸೇವನೆ: ನಾಲ್ವರು ವಶಕ್ಕೆ
Update: 2019-07-23 17:07 GMT
ಉಡುಪಿ, ಜು.23: 76ನೇ ಬಡಗುಬೆಟ್ಟು ಗ್ರಾಮದ ಕಸ್ತೂರ್ಬಾ ನಗರದ ರಿಕ್ಷಾ ನಿಲ್ದಾಣದ ಬಳಿ ಜು.22ರಂದು ಮಧ್ಯಾಹ್ನ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಕೃಷ್ಣ(35) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲ್ಪೆ: ಗಾಂಜಾ ಸೇವನೆಗೆ ಸಂಬಂಧಿಸಿ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಸೇತುವೆ ಬಳಿ ಬಡಾನಿಡಿಯೂರು ಗ್ರಾಮದ ಕದಿಕೆ ನಿವಾಸಿ ರಾಕೇಶ್(20) ಹಾಗೂ ಪಡುತೋನ್ಸೆ ಗ್ರಾಮದ ನೀಲತರಂಗ ರೆಸಾರ್ಟ್ ಬಳಿ ಗುಜ್ಜರಬೆಟ್ಟು ವಿನ ಪುನೀತ್ ಎಂಬವರನ್ನು ಮಲ್ಪೆ ಪೊಲೀಸರು ಜು.22ರಂದು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿದ್ದಾರೆ.
ಉಡುಪಿ ಡಿಸಿಐಬಿ ಪೊಲೀಸರು ಜು.21ರಂದು ಮಲ್ಪೆ ಟೂರಿಸ್ಟ್ ಬಾರ್ ರೆಸ್ಟೋರೆಂಟ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ರಕ್ಷಿತ್ ಪ್ರಸಾದ್ ಎಂಬಾತ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.