ಹಾವು ಕಡಿತದಿಂದ ಮೃತ್ಯು

Update: 2019-07-23 17:09 GMT

ಬ್ರಹ್ಮಾವರ, ಜು.23: ವಿಷದ ಹಾವು ಕಡಿತಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು.22ರಂದು ರಾತ್ರಿ ವೇಳೆ ಕುದಿ ಗ್ರಾಮದ ಕುಂಜೂರು ಎಂಬಲ್ಲಿ ನಡೆದಿದೆ.

ಮೃತರನ್ನು ಕುಂಜೂರು ವಡ್ಡಂಬೆಟ್ಟು ನಿವಾಸಿ ಮೋಹನ ಪೂಜಾರಿ(68) ಎಂದು ಗುರುತಿಸಲಾಗಿದೆ. ಜು.22ರಂದು ಮಧ್ಯಾಹ್ನ 12:30ರ ಸುಮಾರಿಗೆ ಮನೆಯ ದನದ ಕೊಟ್ಟಿಗೆಯಲ್ಲಿ ವಿಷದ ಹಾವೊಂದು ಮೋಹನ್ ಪೂಜಾರಿಯ ಕಾಲಿಗೆ ಕಚ್ಚಿತ್ತೆನ್ನಲಾಗಿದೆ.

ಈ ಬಗ್ಗೆ ನಾಟಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದ ಮೋಹನ್ ಪೂಜಾರಿಗೆ ಜು.23 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News