ತಲ್ಲೂರು ಗ್ರಾಪಂ ಕಾರ್ಯದರ್ಶಿಗೆ ಚಪ್ಪಲಿಯಿಂದ ಹಲ್ಲೆ

Update: 2019-07-23 17:10 GMT

ಕುಂದಾಪುರ, ಜು.23: ತಲ್ಲೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ವಾಸುದೇವ ಶ್ಯಾನುಭಾಗ(58) ಎಂಬವರಿಗೆ ದಂಪತಿ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಇಂದು ಮಧ್ಯಾಹ್ನ  ನಡೆದಿದೆ.

ಉಪ್ಪಿನಕುದ್ರು ಗ್ರಾಮದ ಸದಾಶಿವ ಶೇರುಗಾರ್ ಹಾಗೂ ಅವರ ಪತ್ನಿ ಗ್ರಾಪಂ ಕಚೇರಿಗೆ ಆಗಮಿಸಿ ಕಚೇರಿ ಒಳಗಿದ್ದ ವಾಸುದೇವ ಶ್ಯಾನುಭಾಗ್, ಬಿಲ್ ಕಲೆಕ್ಟರ್ ನಾರಾಯಣ, ಗುಮಾಸ್ತೆ ಮಂಜುಳಾ, ಕಂಪ್ಯೂಟರ್ ಆಪ ರೇಟರ್ ಶಾಲಿನಿ ಎಂಬವರಿಗೆ ಅವಾಚ್ಯವಾಗಿ ಬೈದರೆನ್ನಲಾಗಿದೆ.

ಬಳಿಕ ಏಕಾಏಕಿ ಸದಾಶಿವ ಶೇರುಗಾರ ಚಪ್ಪಲಿಯನ್ನು ತೆಗೆದು ವಾಸುದೇವ ಶ್ಯಾನುಭಾಗರಿಗೆ ಹೊಡೆದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವು ದಾಗಿ ದೂರಲಾಗಿದೆ.

ಈ ಬಗ್ಗೆ ಕುಂದಾಫುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News