ಜು. 26ರಂದು ಸಹ್ಯಾದ್ರಿ ಕಾಲೇಜಿನಲ್ಲಿ ವಾಕ್ ಇನ್ ಇಂಟರ್ ವ್ಯೂ

Update: 2019-07-23 17:15 GMT

ಮಂಗಳೂರು, ಜು. 23: ಬೆಂಗಳೂರಿನ ತಾಂತ್ರಿಕ ಶಿಕ್ಷಣ ಮತ್ತು ಸಹ್ಯಾದ್ರಿ ಕಾಲೇಜು ಆ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಮಂಗಳೂರು ಜಂಟಿಯಾಗಿ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಜು.26ರಂದು ಬೆಳಗ್ಗೆ 8.30ಕ್ಕೆ ಪದವೀಧರರು, ಇಂಜಿನಿಯರ್‌ಗಳು ಮತ್ತು ಡಿಪ್ಲೊಮಾ ಹೊಂದಿದವರಿಗೆ ಕೇಂದ್ರೀಕೃತ ವಾಕ್ ಇನ್ ಇಂಟರ್‌ ವ್ಯೂ ನಡೆಯಲಿದೆ ಎಂದು ಕಾಲೇಜಿನ ಪ್ಲೇಸ್‌ಮೆಂಟ್ ಡೀನ್ ಪ್ರೊ. ರಶ್ಮಿ ಭಂಡಾರಿ ಹೇಳಿದರು.

ಅವರು ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿಗಳು 2017, 2018 ಹಾಗೂ 2019ರಲ್ಲಿ ಉತ್ತೀರ್ಣರಾದವರು ಇದರಲ್ಲಿ ಭಾಗವಹಿಸುವ ಅವಕಾಶವಿದೆ.

ಅಭ್ಯರ್ಥಿಗಳಿಗೆ ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ, ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ನವೀಕರಿಸಿದ ಸಿವಿಯ ಬಹು ಪ್ರತಿಗಳು, ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು, ಎಲ್ಲ ಮೂಲ ಮತ್ತು ಪ್ರಮಾಣಗಳನ್ನು ಒಳಗೊಂಡಂತೆ ಗುರುತು ಕಾರ್ಡ್‌ಗಳ ಜೆರಾಕ್ಸ್ ಪ್ರತಿಗಳನ್ನು ತರಬೇಕು.

ವಾಕ್ ಇನ್ ಸಂದರ್ಶನದಲ್ಲಿ ಐಬಿಎಂ, ರಿಲಯನ್ಸ್ ಜಿಯೋ , ಕೆಐಒಸಿಎಲ್ ಲಿಮಿಟೆಡ್, ಒಎನ್‌ಜಿಸಿ ಮಂಗಳೂರು, ಇಂಡಿಯಾ ಎಲ್‌ಎಲ್‌ಪಿ, ಆರ್ಟೆಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಕೆನರಾ ವರ್ಕ್‌ಶಾಪ್ ಲಿಮಿಟೆಡ್ ಮಂಗಳೂರು, ಟ್ರ್ಯಾಕ್ಟರ್ಸ್ ಮತ್ತು ಪಾರ್ಮ್ ಎಕ್ವಿಪ್ಮೆಂಟ್ ಲಿಮಿಟೆಡ್, ಕ್ಯಾಲಿಪರ್ ಇಂಜಿನಿಯರಿಂಗ್ ಮತ್ತು ಲ್ಯಾಬ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಭಾಗವಹಿಸಲಿದೆ ಎಂದರು.

ಗೋಷ್ಠಿಯಲ್ಲಿ ಪ್ಲೇಸ್‌ಮೆಂಟ್ ಕೋ- ಆರ್ಡಿನೇಟರ್ ಅನುಷಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News