ಮೂಡುಬಿದಿರೆ: ಮಳೆಗೆ ಮನೆ ಕುಸಿತ

Update: 2019-07-23 17:37 GMT

ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ವಠಾರದಲ್ಲಿರುವ  ಶಾಂತಮ್ಮ ಹರಿಶ್ಚಂದ್ರ ಆಚಾರ್ಯ ಅವರ ಮನೆಯ ನೈಋತ್ಯ ಭಾಗವು ಮಂಗಳವಾರ ಮಧ್ಯಾಹ್ನ  ಮಳೆಯಿಂದಾಗಿ ಕುಸಿದುಬಿದ್ದಿದೆ. ಮನೆಯಲ್ಲಿದ್ದವರು ಹೊರಗೆ ಬಂದಿದ್ದ ಸಮಯ  ನಡೆದ ಈ ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.

ಕಳೆದ ಮಳೆಗಾಲದ ವೇಳೆ  ಈ ಮನೆಯ ಆಗ್ನೇಯ ದಿಕ್ಕಿನಲ್ಲಿದ್ದ ಅಡುಗೆ ಕೋಣೆ ಕುಸಿದುಬಿದ್ದಿತ್ತು. ಆ ಬಳಿಕ ಪುಟ್ಟ ನಿವಾಸವೊಂದನ್ನು ನಿರ್ಮಿಸಲು ಶಾಂತಮ್ಮ ಅವರು ಮುಂದಾಗಿದ್ದು ಅದರ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಾಗಿದೆ. ನಿರ್ಮಾಣ ಹಂತದಲ್ಲಿದ ಹೊಸ ಮನೆಯ ಗೋಡೆಗೂ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News