ಗಾಂಜಾ ಸೇವನೆ: ಮಲ್ಪೆಯಲ್ಲಿ ಮೂವರು ವಶಕ್ಕೆ

Update: 2019-07-24 15:44 GMT

ಮಲ್ಪೆ, ಜು.24: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜು.22ರಂದು ಉಡುಪಿ ಡಿಸಿಐಬಿ ಪೊಲೀಸರು ಮಲ್ಪೆಏಳೂರು ಮೊಗ ವೀರ ಸಭಾಭವನದ ಬಳಿ ಸುಮಿತ್ ಸುವರ್ಣ ಮತ್ತು ಮಲ್ಪೆ ಪೊಲೀಸರು ಮಲ್ಪೆಬೀಚ್ ಬಳಿ ಕೊಪ್ಪಳತೋಟದ ನಿಧಿರಾಜ್ ಎಂಬಾತನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಜು.23ರಂದು ಬೆಳಗ್ಗೆ ಮಲ್ಪೆಯ ಹೆರಿಗೆ ಆಸ್ಪತ್ರೆಯ ಬಳಿ ಸ್ಥಳೀಯ ನಿವಾಸಿ ಸುಹಾನ್ ಎಸ್. ಪೂಜಾರಿ ಎಂಬಾತನನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಮೂವರನ್ನು ಕೂಡ ಮಣಿಪಾಲದ ಕೆಎಂಸಿ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ಗಾಂಜಾ ಸೇವನೆ ಮಾಡಿರುವುದನ್ನು ದೃಢಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News