ಎಸ್ಕೆಎಸೆಸ್ಸೆಫ್ ಕೈಕಂಬ ವಲಯದಿಂದ ಶ್ರಮದಾನ
Update: 2019-07-26 15:25 GMT
ಗುರುಪುರ, ಜು.26: ಇಲ್ಲಿನ ಬಂಗ್ಲಗುಡ್ಡೆ ಸೈಟ್ನಲ್ಲಿ ವಿಪರೀತ ಮಳೆಯಿಂದ ಮನೆಯೊಂದರ ಮೇಲೆ ಗುಡ್ಡ ಜರಿದ ಪರಿಣಾಮ ಹಾನಿಗೀಡಾದ ಮನೆಯಲ್ಲಿ ಕೈಕಂಬ ವಲಯ ಎಸ್ಕೆಎಸೆಸ್ಸೆಫ್ ಸದಸ್ಯರಿಂದ ಶ್ರಮದಾನ ನಡೆಯಿತು.
ಎಸ್ಕೆಎಸೆಸ್ಸೆಫ್ ಕೈಕಂಬ ವಲಯದ ವಿಕಾಯ ಅಧ್ಯಕ್ಷ ಇಬ್ರಾಹೀಂರ ಸೂಚನೆಯಲ್ಲಿ ವಿಕಾಯ ಕನ್ವೀನರ್ ಅಕ್ಬರ್ ಅಲಿಯ ನೇತೃತ್ವದಲ್ಲಿ ಕೆಳಗಿನಕೆರೆ ಶಾಖೆಯ ವಿಕಾಯ ಸ್ವಯಂಸೇವಕರಾದ ಹಂಝ, ಝುಬೈರ್,ಅಶ್ಫಕ್, ಹಫೀಝ್, ಆಸೀಫ್, ಎಸ್ಕೆಎಸೆಸ್ಸೆಫ್ ಬಂಗ್ಲಗುಡ್ಡೆ ಸೈಟ್ ಶಾಖೆಯ ಅಧ್ಯಕ್ಷ ದಾವೂದ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.
ಎಸ್ಕೆಎಸೆಸ್ಸೆಫ್ ಕೈಕಂಬ ವಲಯ ಅಧ್ಯಕ್ಷ ಜಮಾಲ್ ದಾರಿಮಿ, ಕಾರ್ಯದರ್ಶಿ ಆರೀಫ್ ಕಮ್ಮಾಜೆ, ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಮಾಸ್ಟರ್, ಅಬ್ದುಲ್ ಸಲಾಂ ಅಡ್ಡೂರು ಭಾಗವಹಿಸಿದ್ದರು.