ಕಾಸರಗೋಡು : ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು

Update: 2019-07-31 12:17 GMT

ಕಾಸರಗೋಡು : ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ನೀರ್ಚಾಲು ಸಮೀಪದ ಮಾನ್ಯದಲ್ಲಿ ನಡೆದಿದೆ.

ಆಲಂಪಾಡಿ ಬಾಫಿಕಿ ನಗರದ ಶಾಫಿ ಎಂಬವರ ಪುತ್ರ ಖಾದರ್ (17) ಮತ್ತು ಬೆಳ್ಳೂರಡ್ಕದ ಮುಹಮ್ಮದ್ ಎಂಬವರ ಪುತ್ರ ಸಾಲಿ (17) ಮೃತರು ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಸ್ನೇಹಿತರ ಜೊತೆ ಸ್ನಾನಕ್ಕಿಳಿದ ಸಂದರ್ಭ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News