ಫಿಟ್‌ನೆಸ್ ತರಬೇತುದಾರನಿಂದ ಸರ ಕಳವು: ಆರೋಪ

Update: 2019-07-31 16:19 GMT

ಕುಂದಾಪುರ, ಜು.31: ಪಿಟ್‌ನೆಸ್ ಟ್ರೈನಿಂಗ್‌ಗೆ ಮನೆಗೆ ಬಂದ ವ್ಯಕ್ತಿಯೊಬ್ಬರು ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದಾರೆ ಎನ್ನಲಾದ ಘಟನೆ ಜು.30ರಂದು ಕುಂದಾಪುರ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ ನಡೆದಿದೆ.

ಎ.ಸಂತೋಷ ಕಾಮತ್(34) ಎಂಬವರ ಮನೆಗೆ ರಾಜಶೇಖರ ದೇವಾಡಿಗ ಎಂಬಾತ ಫಿಟ್‌ನೆಸ್ ಟ್ರೈನಿಂಗ್ ನೀಡಲು ಬಂದಿದ್ದು, ಈ ವೇಳೆ ಸಂತೋಷ್ ಕಾಮತ್ ತನ್ನ ಕುತ್ತಿಗೆಯ ಚಿನ್ನದ ಸರವನ್ನು ಡ್ರಾವರಲ್ಲಿ ಇರಿಸಿ ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ರಾಜಶೇಖರ್ ಡ್ರಾವರ್‌ನಲ್ಲಿ ಇರಿಸಿದ್ದ 1,80,955ರೂ. ಮೌಲ್ಯದ ಆರೂವರೆ ಪವನ್ ತೂಕದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News