ಬೈಕ್ ಢಿಕ್ಕಿ, ಮಹಿಳೆ ಸಾವು
ಕುಂದಾಪುರ, ಆ.1: ಬೈಕೊಂದು ಮುಖಾಮುಖಿ ಡಿಕ್ಕಿ ಹೊಡೆದು, ಸಹಸವಾರಳಾಗಿ ಪ್ರಯಾಣಿಸುತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ 8:45ರ ಸುಮಾರಿಗೆ ಕುಂಭಾಶಿ ಗ್ರಾಮದ ಆನೆಗುಡ್ಡೆ ಸ್ವಾಗತ ಗೋಪುರದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಶ್ರೀಶ ಎಂಬವರು ತನ್ನ ಬುಲ್ಲೆಟ್ನ್ನು ಕುಂದಾಪುರ ಕಡೆಯಿಂದ ವೇಗವಾಗಿ ಚಲಾಯಿಸಿಕೊಂಡು ಬಂದು, ತೆಕ್ಕಟ್ಟೆಯಿಂದ ಕುಂದಾಪುರದತ್ತ ಸಾಗುತಿದ್ದ ನಾಗರಾಜ ಎಂಬವರು ಚಲಾಯಿಸುತಿದ್ದ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಇದರಿಂದ ಸಹ ಸವಾರಳಾಗಿ ಬೈಕನಲ್ಲಿದ್ದ ಹೇಮಾ ಎಂಬವರ ತಲೆ ಮ್ತು ಹಣೆಗೆ ಗಂಭೀರ ಗಾಯವಾಗಿತ್ತು.
ಶ್ರೀಶ ಎಂಬವರು ತನ್ನ ಬುಲ್ಲೆಟ್ನ್ನು ಕುಂದಾಪುರ ಕಡೆಯಿಂದ ವೇಗವಾಗಿ ಚಲಾಯಿಸಿಕೊಂಡು ಬಂದು, ತೆಕ್ಕಟ್ಟೆಯಿಂದ ಕುಂದಾಪುರದತ್ತ ಸಾಗುತಿದ್ದ ನಾಗರಾಜ ಎಂಬವರು ಚಲಾಯಿಸುತಿದ್ದ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಇದರಿಂದ ಸಹ ಸವಾರಳಾಗಿ ಬೈಕನಲ್ಲಿದ್ದ ಹೇಮಾ ಎಂಬವರ ತಲೆ ಮತ್ತು ಹಣೆಗೆ ಗಂಭೀರ ಗಾಯವಾಗಿತ್ತು. ಮೂವರೂ ಕೋಟೇಶ್ವರ ಹಾಗೂ ಕುಂದಾಪುರ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಮಣಿಪಾಲಕ್ಕೆ ಹೋಗಿದ್ದು, ಅಲ್ಲಿಗೆ ಹೋಗುವಾದ ಗಂಭೀರವಾಗಿ ಗಾಯಗೊಂಡಿದ್ದ ಹೇಮಾ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಸಂಚಾರ ಠಾಣಾ ಪೊಲೀಸರು ತಿಳಿಸಿದ್ದಾರೆ.