ರೋಟರ್ಯಾಕ್ಟ್ ಜಿಲ್ಲಾ ಕೌನ್ಸಿಲ್ ಪದಗ್ರಹಣ ಸಮಾರಂಭ

Update: 2019-08-03 15:37 GMT

ಕಾಪು, ಆ.3: ಕಟಪಾಡಿ ರೋಟರ್ಯಾಕ್ಟ್ ಕ್ಲಬ್ ಮತ್ತು ರೋಟರ್ಯಾಕ್ಟ್ ಡಿಸ್ಟ್ರಿಕ್ಟ್ 3182 ಇದರ ವತಿಯಿಂದ ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ರೋಟರ್ಯಾಕ್ಟ್ ಜಿಲ್ಲಾ ಕೌನ್ಸಿಲ್ ಪದಗ್ರಹಣ ಹಾಗೂ 4ನೇ ಜಿಲ್ಲಾ ಅಧಿವೇಶನ ಮತ್ತು 2018-19ನೇ ಸಾಲಿನ ಅವಾರ್ಡ್ ಪ್ರದಾನ ಬೆಸುಗೆ ಸಮಾರಂಭ ಸಮಾರೋಪ ಕಟಪಾಡಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.

ಮುಖ್ಯ ಅತಿಥಿಗಳಾಗಿ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3182 ಇದರ ನಿಯೋಜಿತ ಜಿಲ್ಲಾ ಗವರ್ನರ್ ಬಿ.ರಾಜಾರಾಮ ಭಟ್, ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್ ಕೆ.ಸತ್ಯೇಂದ್ರ ಪೈ, ರೋಟರ್ಯಾಕ್ಟ್ ಜಿಲ್ಲಾ ಸಬಾಪತಿ ಜಗನ್ನಾಥ ಕೋಟೆ, ಅವಾರ್ಡ್ ಸಮಿತಿ ಸಭಾಪತಿ ಬಿ.ಪುಂಡಲೀಕ  ಶಿರ್ವ ಶುಭ ಹಾರೈಸಿದರು.

ಜೆರೋಮ್ ರೊಡ್ರಿಗಸ್ ಶಂಕರಪುರ, ರೋಟರ್ಯಾಕ್ಟ್ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಆಚಾರ್ಯ ಕಟಪಾಡಿ ರೊಟರ್ಯಾಕ್ ಸಭಾಪತಿ ವಿಲ್ಫ್ರೇಡ್ ಲೂವಿಸ್, ನಿಕಟ ಪೂರ್ವ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಜಿಲ್ಲಾ ಪ್ರತಿನಿಧಿ ಪ್ರಕಾಶ್ ನಾಯಕ್ ವಹಿಸಿದ್ದರು. ಕಟಪಾಡಿ ರೋಟರ್ಯಾಕ್ಟ್ ಅಧ್ಯಕ್ಷ ನಿಧಿರಾಜ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಅಧಿವೇಶನದ ಸಬಾಪತಿ ಪ್ರಕಾಶ್ ಆಚಾರ್ಯ ವಂದಿಸಿದರು. ರಾಯನ್ ಮಾಯಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News