ಉಪ್ಪಿನಂಗಡಿ: ಮೊಬೈಲ್ ಚಾರ್ಚ್ ಇಡುವ ವೇಳೆ ವಿದ್ಯುತ್ ಆಘಾತ; ವ್ಯಕ್ತಿ ಮೃತ್ಯು

Update: 2019-08-05 14:02 GMT

ಉಪ್ಪಿನಂಗಡಿ: ಮೊಬೈಲ್ ಚಾರ್ಚ್‍ಗೆ ಇಡುವ ಸಂದರ್ಭ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ 34ನೇ ನೆಕ್ಕಿಲಾಡಿ ಗ್ರಾಮದ ಕೊಳಕ್ಕೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಕೊಳಕ್ಕೆ ನಿವಾಸಿ ಲಕ್ಷ್ಮಣ ಗೌಡ (50) ಮೃತರು ಎಂದು ಗುರುತಿಸಲಾಗಿದೆ.

ಇವರು ಸೋಮವಾರ ಸಂಜೆ ತನ್ನ ಮನೆಯಲ್ಲಿ ಮೊಬೈಲ್‍ ನ್ನು ಚಾರ್ಚ್ ಮಾಡಲು ಇಟ್ಟಾಗ ವಿದ್ಯುತ್ ಆಘಾತಕ್ಕೊಳಗಾಗಿದ್ದು, ಅಲ್ಲಿಂದ ಎಸೆಯಲ್ಪಟ್ಟಿದ್ದು, ಕೂಡಲೇ ಮನೆಯವರು ಇವರನ್ನು ಉಪ್ಪಿನಂಗಡಿ ಆಸ್ಪತ್ರೆಗೆ ಕರೆ ತಂದರಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಮೃತರು ಕೂಲಿ ಕಾರ್ಮಿಕರಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. 

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News