ಹೊಳೆಗೆ ಬಿದ್ದು ಮಹಿಳೆ ಮೃತ್ಯು

Update: 2019-08-05 17:11 GMT

ಕಾರ್ಕಳ, ಆ.6: ದೇವರಗುಂಡಿ ಹೊಳೆ ದಾಟುತ್ತಿದ್ದ ಮಹಿಳೆಯೊಬ್ಬರು ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಆ.4ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಮಾಳ ಗ್ರಾಮದ ಕಣೆಗುಂಡಿ ನಿವಾಸಿ ಜನಾರ್ದನ ಗೌಡ ಎಂಬವರ ಪತ್ನಿ ರಾಜೀವಿ ಗೌಡ(37) ಎಂದು ಗುರುತಿಸಲಾಗಿದೆ. ಇವರು ತನ್ನ ಪತಿ ಜೊತೆ ಕೃಷಿ ಕೆಲಸಕ್ಕೆ ಮನೆಯ ಸಮೀಪದಲ್ಲಿರುವ ದೇವರಗುಂಡಿ ಹೊಳೆಯನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News