ಕಳ್ಳತನದ ಶಂಕೆ: ಬಾಲಕನ ಥಳಿಸಿ ಹತ್ಯೆ

Update: 2019-08-06 16:36 GMT

ಹೊಸದಿಲ್ಲಿ, ಆ. 6: ಕಳವುಗೈದ ಶಂಕೆಯಲ್ಲಿ 17 ವರ್ಷದ ಬಾಲಕನನ್ನು ಥಳಿಸಿ ಹತ್ಯೆಗೈದ ಘಟನೆ ಗಯಾದ ಕಲ್ಯಾಣ್‌ಪುರ ಪ್ರದೇಶದಲ್ಲಿ ಸೋಮವಾರ ಸಂಭವಿಸಿದೆ. ಮೃತಪಟ್ಟ ಬಾಲಕನನ್ನು ಅರ್ಜುನ್ ಮಾಂಝಿ ಎಂದು ಗುರುತಿಸಲಾಗಿದೆ.

ನಾಲ್ವರು ಕಳ್ಳರು ದಿಲ್ಲಿಯಲ್ಲಿರುವ ಎಲ್‌ಐಸಿ ಏಜೆಂಟ್ ಜಿತೇಂದ್ರ ಕುಮಾರ್ ಅವರ ನಿವಾಸಕ್ಕೆ ರವಿವಾರ ರಾತ್ರಿ ಪ್ರವೇಶಿಸಿದರು. ಈ ಸಂದರ್ಭ ಕುಟುಂಬದ ಓರ್ವ ಸದಸ್ಯ ಎಚ್ಚರನಾಗಿ ಕೂಗಿಕೊಂಡ. ಕೂಡಲೇ ಕುಮಾರ್ ಅವರ ನೆರೆಯವರು ಸೇರಿ ಇಬ್ಬರು ಕಳ್ಳರನ್ನು ಹಿಡಿದರು. ಇವರಲ್ಲಿ ಓರ್ವ ಕಳ್ಳ ಪರಾರಿಯಾದ. ಇನ್ನೋರ್ವ ಮಾಂಝಿ. ಆತನಿಗೆ ಗುಂಪಿ ಥಳಿಸಿತು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುವ ಹೊತ್ತಿಗೆ ಗಂಭೀರ ಗಾಯಗೊಂಡಿದ್ದ ಮಾಂಝಿ ಮೃತಪಟ್ಟಿದ್ದಾನೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ, ಮಾಂಝಿಯ ತಾಯಿ, ತನ್ನ ಪುತ್ರ ಭೂತಾನ್‌ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆತ ಗಯಾಕ್ಕೆ ಆಗಮಿಸಿದ್ದ. ರವಿವಾರ ನನ್ನ ಪುತ್ರನ ಮೂವರು ಗೆಳೆಯರು ಮನೆಗೆ ಆಗಮಿಸಿ ಅತನನ್ನು ಕರೆದೊಯ್ದಿದ್ದಾರೆ. ನನ್ನ ಪುತ್ರ ಕಳ್ಳನಲ್ಲ ಎಂದು ಹೇಳಿದ್ದಾರೆ. ಮಾಂಝಿಯ ಮೂವರು ಗೆಳೆಯರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News