ಹನುಮಾನ್ ನಗರದಲ್ಲಿ ತೀವ್ರ ಕಡಲ್ಕೊರೆತ: ಹಲವು ಮನೆಗಳು ಅಪಾಯದಲ್ಲಿ

Update: 2019-08-06 17:20 GMT

ಮಂಜೇಶ್ವರ : ಉಪ್ಪಳ ಹನುಮಾನ್ ನಗರದಲ್ಲಿ ಮಂಗಳವಾರ ಕಡಲ್ಕೊರೆತ ತೀವ್ರಗೊಂಡಿದ್ದು, ಸಮುದ್ರ ತೀರದ ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿದೆ. ಈ ಪರಿಸರದ ಹಲವಾರು ಮನೆಗಳ ಆವರಣ ಗೋಡೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದು, ಭಾಗಶಃ ಹಾನಿಗೊಂಡಿದೆ. ಈ ಪರಿಸರದ ಒಂದು ಕುಟುಂಬವನ್ನು ಸ್ಥಳಾಂತರಿಸಲಾಗಿದೆ.

ಕಳೆದ ಒಂದು ವಾರದಿಂದ ಉಪ್ಪಳ ಪರಿಸರದ ಕಡಲು ತೀರ ವ್ಯಾಪಕ ಕಡಲ್ಕೊರೆತದಿಂದ ಹಾನಿಗೊಳಗಾಗಿದೆ. ಸೋಮವಾರ-ಮಂಗಳವಾರದಲ್ಲಿ ಹನುಮಾನ್ ನಗರದ ಒಂದೂವರೆ ಕಿಲೋಮೀಟರ್ ಗಳಷ್ಟು ರಸ್ತೆ ಕುಸಿದಿದೆ. ರಸ್ತೆ ಬದಿಯ ತಡೆಗೋಡೆಯೂ ಕುಸಿದಿದೆ. ಈ ಪರಿಸರದ ಮೀನು ಕಾರ್ಮಿಕರ ಸಹಿತ ಹಲವರ ಮನೆಗಳು ಅಪಾಯದಂಚಿನಲ್ಲಿದೆ. ಮೋಹಿನಿ ಎಂಬವರ ಕುಟುಂಬವನ್ನು ಸ್ಥಳಾಂತರಿಸಲಾಗಿದೆ. 

ಮುಸೋಡಿಯಿಂದ ಐಲ ಶಿವಾಜಿನಗರ ತನಕ ಸಮುದ್ರ ಸಮೀಪದ ರಸ್ತೆ ಹನುಮಾನ್ ನಗರದಲ್ಲಿ ಸಂಪೂರ್ಣ ನಾಶವಾಗಿರುವುದರಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News