ವೆಲ್ಲೂರು ಲೋಕಸಭಾ ಚುನಾವಣೆ: ಡಿಎಂಕೆಗೆ ಜಯ

Update: 2019-08-09 17:29 GMT

ಚೆನ್ನೈ, ಆ.9: ವೆಲ್ಲೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಡಿಎಂಕೆಯ ಅಭ್ಯರ್ಥಿ ಕದೀರ್ ಆನಂದ್ ಜಯ ಗಳಿಸಿದ್ದಾರೆ.

ಡಿಎಂಕೆ ಪಕ್ಷದ ಹಿರಿಯ ನಾಯಕ  ದೊರೈ ಮುರುಗನ್ ಪುತ್ರ  ಕದೀರ್ ಆನಂದ್ ಅವರು ಎದುರಾಳಿ  ಎಐಎಡಿಎಂಕೆ ಮೈತ್ರಿಕೂಟದ ಅಭ್ಯರ್ಥಿ  ನ್ಯೂ ಜಸ್ಟೀಸ್ ಪಾರ್ಟಿ ಮುಖ್ಯಸ್ಥ  ಎ.ಸಿ. ಷಣ್ಮುಗಮ್ ಅವರನ್ನು  8,141ಮತಗಳ ಅಂತರದಿಂದ ಸೋಲಿಸಿದರು.

ಕದೀರ್ ಆನಂದ್  4,85,340  ಮತ್ತು ಷಣ್ಮುಗಮ್  4,77,199  ಮತಗಳನ್ನು ಪಡೆದರು. ಇದರೊಂದಿಗೆ ತಮಿಳುನಾಡಿನಲ್ಲಿ ಡಿಎಂಕೆ  ಖಾತೆಗೆ ಇನ್ನೊಂದು ಸ್ಥಾನ ಸೇರ್ಪಡೆಗೊಂಡಿದೆ.  ಒಟ್ಟು 39 ಲೋಕಸಭಾ ಕ್ಷೇತ್ರಗಳಲ್ಲಿ   38 ಸ್ಥಾನಗಳು ಡಿಎಂಕೆ ಕೈವಶವಾಗಿದೆ. ಎಐಎಡಿಎಂಕೆ 1 ಸ್ಥಾನವನ್ನು ಪಡೆದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News