ಎಂಟಿಎಂ ದುರ್ಬಳಕೆ: 80ಸಾವಿರ ರೂ. ವಂಚನೆ

Update: 2019-08-09 16:38 GMT

ಉಡುಪಿ, ಆ.9: ಎಟಿಎಂ ಕಾರ್ಡ್ ನಂಬರ್ ದುರ್ಬಳಕೆ ಮಾಡಿ ವ್ಯಕ್ತಿ ಯೊಬ್ಬರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣವನ್ನು ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.7ರಂದು ರಾತ್ರಿ ಹಾಗೂ ಆ.8ರಂದು ಬೆಳಗಿನ ಜಾವ ಅಪರಿಚಿತ ವ್ಯಕ್ತಿ ಕುಂದಾಪುರ ಮೇಲ್ಕೇರಿಯ ಕೆ. ಹರೀಶ್ ಖಾರ್ವಿ(44) ಎಂಬವರ ಎ.ಟಿ.ಎಂ. ಕಾರ್ಡ್ ನಂಬರ್ ದುರ್ಬಳಕೆ ಮಾಡಿ, ಕೆನರಾ ಬ್ಯಾಂಕ್ ಕುಂದಾಪುರ ಶಾಖೆಯ ಖಾತೆಯಿಂದ 8 ಬಾರಿ ಒಟ್ಟು ರೂ. 80,000ರೂ. ಹಣವನ್ನು ಹುಬ್ಬಳ್ಳಿಯ ಎಸ್‌ಬಿಐ ಎಟಿಎಂ ಸೆಂಟರ್‌ನಿಂದ ಡ್ರಾ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News