​ವಳಚ್ಚಿಲ್ ಮಸೀದಿಯ ಸಹಾಯಕ ಮುಅದ್ದಿನ್ ನೀರುಪಾಲು

Update: 2019-08-10 07:13 GMT

ಮಂಗಳೂರು, ಆ.10: ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಸಹಾಯಕ ಮುಅದ್ದಿನ್ ಆಕಸ್ಮಿಕವಾಗಿ ಕಾಲುಜಾರಿ ತೋಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಆತೂರು ಕೊಯಿಲ ನಿವಾಸಿ ಅಬ್ದುರ್ರಝಾಕ್ ಮೃತಪಟ್ಟವರು. ಅವರು ಇಂದು ಬೆಳಗ್ಗೆ ಮಸೀದಿಗೆ ಬೆಳಗ್ಗಿನ ಉಪಾಹಾರ ತರಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ಉಪಾಹಾರದೊಂದಿಗೆ ತೋಡು ದಾಟುತ್ತಿದ್ದ ಸಂದರ್ಭ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದರೆನ್ನಲಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News