ಔಷಧಿ ಬದಲು ಕೀಟನಾಶಕ ಸೇವಿಸಿ ಮೃತ್ಯು

Update: 2019-08-10 16:18 GMT

ಕೋಟ, ಆ.10: ಕಣ್ಣಿನ ದೃಷ್ಟಿದೋಷದಿಂದ ಔಷಧಿ ಬದಲು ಕೀಟನಾಶಕ ಸೇವಿಸಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಐರೋಡಿ ಗ್ರಾಮದ ಹೆಬ್ಬಾರ್ಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಹೆಬ್ಬಾರ್‌ಬೆಟ್ಟು ನಿವಾಸಿ ಜಲಜ ಪೂಜಾರ್ತಿ (78) ಎಂದು ಗುರುತಿಸಲಾಗಿದೆ. ಇವರು ಜು.30ರಂದು ರಾತ್ರಿ ವೈದ್ಯರು ನೀಡಿರುವ ಔಷಧಿ ಮತ್ತು ಮಾತ್ರೆ ತೆಗೆದುಕೊಳ್ಳುವ ಬದಲು ಕೃಷಿಗೆ ತಂದಿಟ್ಟಿದ್ದ ಕೀಟನಾಶಕವನ್ನು ಸೇವಿಸಿದ್ದರೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು ಆ.9 ರಂದು ಸಂಜೆ ವೇಳೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News