ಮನೆಗಳಿಗೆ ಹಾನಿ: ಸಂತ್ರಸ್ತರಿಗೆ ಸಹಾಯಧನ ವಿತರಣೆ

Update: 2019-08-11 13:07 GMT

ಬೈಂದೂರು, ಆ.11: ವಿಪರೀತ ಮಳೆ ಗಾಳಿಯಿಂದ ಹಾನಿಗೊಂಡ ಮನೆಗಳ ಕುಟುಂಬಗಳಿಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬೈಂದೂರು ಘಟಕದ ವತಿಯಿಂದ ಇಂದು ಸಹಾಯಧನ ವಿತರಿಸಲಾಯಿತು. 

ಘಟಕದ ಅಧ್ಯಕ್ಷ ಹಸನ್ ಮಾವಡ್ ನೇತೃತ್ವದಲ್ಲಿ ಕಾರ್ಯದರ್ಶಿ ಮೌಲಾನಾ ಜಮೀರ್ ಅಹಮ್ಮದ್ ರಶಾದಿ, ಜಿಲ್ಲಾ ಸಮಿತಿ ಸದಸ್ಯ ತಬ್ರೇಜ್ ನಾಗೂರು, ಫಯಾಜ್ ಅಲಿ ಬೈಂದೂರು, ರಫೀಕ್ ನಾಗೂರು, ಕೆ.ಖಾಜಾ ಸಾಹೇಬ್, ಅಫ್ತಾಬ್ ಕಿರಿಮಂಜೇಶ್ವರ, ಶಕೀಲ್ ಶಿರೂರು ಮುಂತಾದವರು ಹಾನಿಗೊಳ ಗಾಗಿರುವ ವಿವಿಧ ಧರ್ಮಗಳ 11 ಮನೆಗಳಿಗೆ ಭೇಟಿ ನೀಡಿ ಸಹಾಯ ಧನ ಹಸ್ತಾಂತರಿಸಿ ಸಾಂತ್ವಾನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News