ನೂತನ ಪೋಲಿಸ್ ಆಯುಕ್ತರಿಂದ ಬಕ್ರೀದ್ ಶುಭಾಶಯ
Update: 2019-08-12 04:32 GMT
ಮಂಗಳೂರು, ಆ. ೧೨: ನಗರದ ಬಾವುಟ ಗುಡ್ಡ ಈದ್ಗಾ ಮಸೀದಿಗೆ ಭೇಟಿ ನೀಡದ ಸಂದರ್ಭದಲ್ಲಿ ನೂತನ ಆಯುಕ್ತ ಡಾ. ಹರ್ಷ ಅವರು ಮಕ್ಕಳು ಸೇರಿದಂತೆ ಅಲ್ಲಿದ್ದ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ನೀಡಿದರು.
ಹಬ್ಬಗಳು ಯಾವತ್ತೂ ಭಾತ್ರತ್ವ ಹಾಗೂ ಶಾಂತಿಯ ಸಂದೇಶವನ್ನು ನೀಡುತ್ತವೆ ಎಂದು ತಮ್ಮ ಸಂದೇಶದಲ್ಲಿ ಅವರು ಹೇಳಿದ್ದಾರೆ.
ವರಮಹಾಲಕ್ಷ್ಮಿ, ಬಕ್ರೀದ್ ಹಾಗೂ ನಮ್ಮ ದೇಶದ ಬಹುದೊಡ್ಡ ಹಬ್ಬ ಸ್ವಾತಂತ್ರ್ಯ ದಿನಾಚರಣೆಗೂ ಅವರು ಪೂರ್ವಭಾವಿಯಾಗಿ ಮಂಗಳೂರಿಗರಿಗೆ ಶುಭಾಶಯ ನೀಡಿದ್ದಾರೆ.