ಆ.18ರಂದು ಕೊಡವೂರು ಕೃಷ್ಣ ವೇಷ ಸ್ಪರ್ಧೆ

Update: 2019-08-13 14:37 GMT

ಉಡುಪಿ, ಆ.13: ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.18ರಂದು ಬೆಳಿಗ್ಗೆ 8:30ಕ್ಕೆ ಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಮುದ್ದು ಕೃಷ್ಣ(2 ವರ್ಷದವರೆಗೆ), ಬಾಲಕೃಷ್ಣ(2-5 ವರ್ಷ),ಕಿಶೋರ ಕೃಷ್ಣ (5-10ವರ್ಷ), ರಾಧಾ ಕೃಷ್ಣ(10 ವರ್ಷ ಮೇಲ್ಪಟ್ಟು) ಸಹಿತ ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರಥಮ 150 ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ಹಾಗು ಸುಧಾಮ ಜೋಳಿಗೆ ನೀಡಲಾಗುವುದು. ಅವರವರ ಆಯ್ಕೆಯ ಕೃಷ್ಣನ ಕುರಿತ ಹಾಡಿಗೆ ನರ್ತಿಸಬಹುದು.

ಸ್ಪರ್ಧೆಗಳ ಪ್ರತಿಯೊಂದು ವಿಭಾಗದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಿಗೆ ಆಕರ್ಷಕ ಬಹುಮಾನದೊಂದಿಗೆ ನಗದು ಪುರಸ್ಕಾರ ನೀಡಲಾಗು ವುದು. ಹೆಚ್ಚಿನ ವಿವರಗಳಿಗೆ ಹಾಗೂ ನೋಂದಣಿಗಾಗಿ ದೇವಳದ ಕಚೇರಿ ಅಥವಾ ಪೂರ್ಣಿಮಾ ಜನಾರ್ದನ್(9481214104) ಅವರನ್ನು ಸಂಪರ್ಕಿಸು ವಂತೆ ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News