ಪಾದುವಾ ಕಾಲೇಜಿನಲ್ಲಿ ರಂಗಗೀತೆ ಕಲಿಕಾ‌‌ ಕಮ್ಮಟ ಪ್ರಾರಂಭ

Update: 2019-08-14 11:58 GMT

ಮಂಗಳೂರು: ಸಿನೇಮಾ ಹಾಗೂ ರಂಗ‌ ನಿರ್ದೇಶಕ ರಾಜ್ ಗುರು ಹೊಸ್ಕೋಟೆ ಹಾಗೂ ರಂಗ ನಟಿ, ನಿರ್ದೇಶಕಿ ನಯನಾ ಸೂಡ ಇವರ ನೇತೃತ್ವದಲ್ಲಿ ಪಾದುವಾ ಕಾಲೇಜಿನಲ್ಲಿ ನಡೆಯುತ್ತಿರುವ ನೂರು ದಿನಗಳ ರಂಗ‌ ಶಿಬಿರದ ಅಂಗವಾಗಿ ರಂಗ ಗೀತೆಗಳ ಹಾಗೂ ಜನಪದ ಹಾಡುಗಳ ಕಲಿಕಾ ಕಮ್ಮಟ ಇಂದಿನಿಂದ ಪ್ರಾರಂಭವಾಯಿತು.

ಶಿಬಿರದಲ್ಲಿ ಮೂಲ ಶಿಬಿರಾರ್ಥಿಗಳಲ್ಲದೇ, ಆಸಕ್ತ ಸಾರ್ವಜನಿಕರೂ ಭಾಗವಹಿಸಿದ್ದರು. ಮೂರು ದಿನಗಳ ಕಾಲ ನಡೆಯುವ ಈ ಕಲಿಕಾ ಕಮ್ಮಟದಲ್ಲಿ ಬೇರೆ ಬೇರೆ ನಾಟ್ಕಗಳ ಹಾಡುಗಳನ್ನು ಶಿಬಿರಾರ್ಥಿಗಳು ಕಲಿಯಲಿದ್ದಾರೆ. ಹಾಗೆಯೇ ಇದೇ ತಂಡದಿಂದ ಆಗಸ್ಟ್ 15ರಂದು ಪಾದುವಾ ಕಾಲೇಜಿನ ಸಭಾಂಗಣದಲ್ಲಿ ರಂಗಗೀತೆಗಳ ಹಾಗೂ ಜನಪದ ಗೀತೆಗಳ ಸಾರ್ವಜನಿಕ ಪ್ರದರ್ಶನವಿದೆ. ಈ ಮೂರು ದಿನಗಳೂ ಉಚಿತ ಪ್ರವೇಶವಿದೆ. ಆಸಕ್ತರು ಸದುಪಯೋಗಪಡಿಸಿಕೊಳ್ಳಲು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News