ಚಡಗ ಸ್ಮಾರಕ ಪ್ರಶಸ್ತಿಗೆ ಕೃತಿಗಳ ಆಹ್ವಾನ

Update: 2019-08-14 14:32 GMT

ಉಡುಪಿ, ಆ.14: ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನದ ಪ್ರಾಯೋಜಕತ್ವದಲ್ಲಿ ಖ್ಯಾತ ಸಾಹಿತಿ, ಸಂಘಟಕ ಪಾಂಡೇಶ್ವರ ಸೂರ್ಯ ನಾರಾಯಣ ಚಡಗರ ಸಂಸ್ಮರಣೆಯಲ್ಲಿ ನೀಡಲಾಗುವ ‘ಚಡಗ ಸ್ಮಾರಕ ಪ್ರಶಸ್ತಿ’ ಗಾಗಿ 2018ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ.

ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವ ಕಥಾ ವಸ್ತುವನ್ನೊಳ ಗೊಂಡ ಕಾದಂಬರಿ ಕನಿಷ್ಠ 100-150 ಪುಟಗಳನ್ನಾದರೂ ಹೊಂದಿದ್ದು, ಲೇಖಕರ ಸ್ವಂತ ರಚನೆಯಾಗಿರಬೇಕು. ಮೂವರು ತೀರ್ಪುಗಾರರು ಕಾದಂಬರಿ ಗಳ ವೌಲ್ಯಮಾಪನ ಮಾಡಿ ನೀಡಿದ ಅಂಕಗಳ ಆಧಾರದಲ್ಲಿ ಪ್ರಶಸ್ತಿಯ ಆಯ್ಕೆ ನಡೆಯಲಿದೆ. ಪ್ರಶಸ್ತಿ 10,000 ರೂ. ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಗಳ ನ್ನೊಳಗೊಂಡಿರುತ್ತದೆ.

ಲೇಖಕರು ಅಥವಾ ಪ್ರಕಾಶಕರು ಪ್ರಕಟಿತ ಪುಸ್ತಕಗಳ ನಾಲ್ಕು ಪ್ರತಿಗಳನ್ನು ಸೆಪ್ಟಂಬರ್ ತಿಂಗಳ ಎರಡನೇ ವಾರದೊಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕೃತಿಗಳನ್ನು ಕಳುಹಿಸಲು ಕೋರಲಾಗಿದೆ.

ವಿಳಾಸ: ಕೆ.ಶಾರದಾ ಭಟ್, ನಂ.58, ಶಾಂತಾನಂದ ರೆಸಿಡೆನ್ಸಿ, ಮಿಶನ್ ಆಸ್ಪತ್ರೆ ರಸ್ತೆ, ಉಡುಪಿ -576101. ದೂರವಾಣಿ:0820-2535462, ಮೊಬೈಲ್:9449233462.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News