ಉಡುಪಿ: ಸ್ವಾತಂತ್ರೋತ್ಸವ ದಿನಾಚರಣೆ; ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ
Update: 2019-08-14 14:58 GMT
ಉಡುಪಿ, ಆ.14: ಉಡುಪಿಯ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವ ದಿನಾಚರಣೆ ಆ.15ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಜರಗಲಿದೆ.
ಉಡುಪಿ ಜಿಲ್ಲೆ 1997ರ ಆಗಸ್ಟ್ನಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯೊಬ್ಬರು ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾಧಿಕಾರಿಯಾಗಿರುವ ಹೆಪ್ಸಿಬಾ ರಾಣಿ ಕೊರ್ಲಪಾಟಿ ದ್ವಜಾರೋಹಣ ನೆರವೇರಿಸಿ, ಸ್ವಾತ್ರಂತ್ರೋತ್ಸವ ಸಂದೇಶವನ್ನು ನೀಡಲಿದ್ದಾರೆ.
2007ರ ನ.1 ಹಾಗೂ 2008ರ ಜ.26ರಂದು ಆಗಿನ ಜಿಲ್ಲಾಧಿಕಾರಿ ಹೇಮಲತಾ ಅವರು ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮತ್ತು 2018ರ ಜ.26ರಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ಧ್ವಜಾರೋಹಣ ನೆರವೇರಿಸಿದ್ದರು.