ಗಂಗೊಳ್ಳಿ: ಗಾಳಿಮಳೆಯಿಂದ ಮನೆಗೆ ಹಾನಿ

Update: 2019-08-17 15:49 GMT

ಗಂಗೊಳ್ಳಿ, ಆ.17: ನಿರಂತರ ಸುರಿದ ಮಳೆಯಿಂದಾಗಿ ಗಂಗೊಳ್ಳಿ ಗ್ರಾಮದ ಕೊಡೇರಿಮನೆ ಬ್ಯಾಲಿಹಿತ್ಲುವಿನ ಜಲಜ ಪೂಜಾರ್ತಿ ಎಂಬವರ ಮನೆಯ ಛಾವಣೆ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಇದರ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ.

ಇದರಿಂದಾಗಿ ಬಡ ಕಾರ್ಮಿಕ ಕುಟುಂಬ ಇದೀಗ ಅತಂತ್ರ ವಾಗಿದ್ದು, ಭಯದಲ್ಲಿ ಬದುಕುತ್ತಿದೆ. ಸ್ಥಳಕ್ಕೆ ಗ್ರಾಪಂ ಉಪಾಧ್ಯಕ್ಷೆ ಪ್ರೇಮ ಪೂಜಾರಿ, ಸದಸ್ಯೆ ಸುಮಿತ, ಪಂಚಾಯತ್ ಗ್ರಾಮ ಲೆಕ್ಕಿಗ ಆಗಮಸಿ ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿ ಸಿಪಿಎಂ ಪಕ್ಷದ ನಿಯೋಗವು ಸ್ಥಳಕ್ಕೆ ಭೇಟಿ ನೀಡಿದ್ದು, ಈ ನಿಯೋಗದಲ್ಲಿ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ಸುರೇಶ್ ಕಲ್ಲಾಗರ, ಸಂತೋಷ ಹೆಮ್ಮಾಡಿ, ಅರುಣ್ ಕುಮಾರ್, ಅಭಿನಂದನ, ವಿವೇಕ್ ಚಿಕ್ಕ ಮೊಗವೀರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News