ಕುಂಜಾರುಗಿರಿ: ನೆರೆ ಸಂತ್ರಸ್ತರಿಗೆ 5ಲಕ್ಷ ರೂ. ಮೌಲ್ಯದ ಸಾಮಾಗ್ರಿ ರವಾನೆ

Update: 2019-08-17 15:52 GMT

ಕಾಪು, ಆ.17: ಉಡುಪಿ ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ ಕುಂಜಾರುಗಿರಿ ಶ್ರೀದುರ್ಗಾದೇವಿ ದೇವಸ್ಥಾನದ ವತಿಯಿಂದ ನೆರೆ ಸಂತ್ರಸ್ತ ಕುಟುಂಬಗಳಿಗೆ ಸಂಗ್ರಹಿಸಿದ ಒಟ್ಟು 5 ಲಕ್ಷ ರೂ. ಮೌಲ್ಯದ ತುರ್ತು ಉಪ ಯೋಗಿ ನಿತ್ಯಬಳಕೆಯ ಸಾಮಾಗ್ರಿಗಳನ್ನು ಶನಿವಾರ ದೇವಳದ ಪ್ರಬಂಧಕ ರಾಜೇಂದ್ರ ರಾವ್ ನೇತೃತ್ವದಲ್ಲಿ ಎರಡು ಟೆಂಪೊಗಳಲ್ಲಿ ರವಾನಿಸಲಾಯಿತು.

ದೇವಸ್ಥಾನದಿಂದ 300 ಸೀರೆಗಳ ಸಹಿತ ತುರ್ತು ಉಪಯೋಗಿ ಪರಿಕರ ಗಳು, ಭಕ್ತರಿಂದ 400ಕ್ಕೂ ಅಧಿಕ ಸೀರೆಗಳು ಇತರ ಸಾಮಾಗ್ರಿಗಳನ್ನು ಸಂಗ್ರಹಿ ಸಲಾಗಿದ್ದು, ಈ ಸಾಮಾಗ್ರಿಗಳನ್ನು ಕಾರವಾರ ಸಮೀಪದ ಎರಡು ಕುಗ್ರಾಮಗಳ ಹಳ್ಳಿಗಳಾದ ಕಿನ್ನರ ಮತ್ತು ಮಲ್ಲಾಪುರದ ಸಮೀಪದ ಕದ್ರಾದ ಸಂತ್ರಸ್ಥರಿಗೆ ನೀಡಲಾಗುತ್ತದೆ ಎಂದು ರಾಜೇಂದ್ರ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News