ಆ. 20: ಜಾಕ್ವೆಲ್ ಶುಚಿ ಕಾರ್ಯ; ನೀರು ಪೂರೈಕೆ ಸ್ಥಗಿತ
Update: 2019-08-17 16:38 GMT
ಮಂಗಳೂರು, ಆ.17: ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದ ಜಾಕ್ವೆಲ್ನಲ್ಲಿ ಮರಳು ಕಸಕಡ್ಡಿಗಳು ಮಡ್ಡಿ ಶೇಖರಣೆಗೊಂಡಿದ್ದು, ಶುಚಿ ಕಾರ್ಯದ ಹಿನ್ನೆಯಲೆಯಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಅಲ್ಲದೆ, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು ಜಾಕ್ವೆಲ್ನ್ನು ಶುಚಿಗೊಳಿಸಲಾಗುತ್ತಿದೆ. ಆ.20ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಈ ಅವಧಿಯಲ್ಲಿ ಬೆಂದೂರು ರೇಚಕ ಸ್ಥಾವರದಿಂದ ನೀರು ಸರಬರಾಜು ಆಗುವ ಮಂಗಳೂರು ನಗರ ಭಾಗಶಃ ಪ್ರದೇಶ, ಕಾರ್ಸ್ಟ್ರೀಟ್, ಮೇರಿಹಿಲ್, ಸುರತ್ಕಲ್, ಕೋಡಿಕಲ್ ಭಾಗಶಃ, ಸಸಿಹಿತ್ಲು, ಮುಕ್ಕಾ, ಪಣಂಬೂರು, ಕಾವೂರು, ಕೂಳೂರು ಭಾಗಶಃ, ಕಾಟಿಪಳ್ಳ ಇತ್ಯಾದಿ ಪ್ರದೇಶಗಳಲ್ಲಿ ನೀರು ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.