ಬೈಕ್ ವ್ಯವಹಾದಲ್ಲಿ ವಂಚನೆ : ಆರೋಪಿ ಬಂಧನ

Update: 2019-08-17 17:29 GMT

ಪಡುಬಿದ್ರಿ: ಬೈಕ್ ವ್ಯವಹಾರದಲ್ಲಿ ಗೆಳೆತನವಾಗಿ ಕೊನೆಗೆ ಗೆಳೆಯನಿಗೆ ವಂಚಿಸಿ ಜೈಲು ಸೇರಿದ ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.

ಮಣಿಪಾಲ ಅನಂತನಗರ ನಿವಾಸಿ ಸ್ವರೂಪ್ ಶೆಟ್ಟಿ(23) ಹಾಗೂ ಪಾದೆಬೆಟ್ಟು ನಿವಾಸಿ ಅಭಿಲಾಷ್ ಇಬ್ಬರು ಬೈಕ್ ವ್ಯವಹಾರದಲ್ಲಿ ಗೆಳೆತನವಾಗಿತ್ತು. ಆದರೆ ಈ ಗೆಳೆತನದಲ್ಲಿ ಸ್ವರೂಪ್ ಶೆಟ್ಟಿ, ಅಭಿಲಾಷ್‍ಗೆ ಒಟ್ಟು 26ಲಕ್ಷ ರೂ. ಗಳನ್ನು  ಪಡೆದು ವಂಚಿಸಿದ್ದು, ಈ ಬಗ್ಗೆ ಪಡುಬಿದ್ರಿ  ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸ್ವರೂಪ್ ಶೆಟ್ಟಿಯನ್ನು ಪೊಲೀಸರು ಬಂಧಿಸಿ  ಉಡುಪಿಯ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಆತನಿಗೆ 14ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News