ಫೋನ್ ಕದ್ದಾಲಿಕೆಯಿಂದ ಯಾವುದೇ ಪಕ್ಷ ಹೊರತಾಗಿಲ್ಲ: ಪ್ರಮೋದ್ ಮಧ್ವರಾಜ್
Update: 2019-08-18 15:56 GMT
ಉಡುಪಿ, ಆ.18: ಫೋನ್ ಕದ್ದಾಲಿಕೆ ಹೊಸದೇನು ಅಲ್ಲ. ಈ ಹಿಂದೆ ರಾಮಕೃಷ್ಣ ಹೆಗ್ಡೆ ಕಾಲದಿಂದಲೂ ಫೋನ್ ಕದ್ದಾಲಿಕೆ ನಡೆದಿದೆ. ಮುಖ್ಯಮಂತ್ರಿ ಕೈಕೆಳಗಿನ ಗುಪ್ತಚಾರ ದಳ ಟೆಲಿಫೋನ್ ಕದ್ದಾಲಿಕೆ ಮಾಡುತ್ತದೆ. ಫೋನ್ ಕದ್ದಾಲಿಕೆಯಿಂದ ಯಾವುದೇ ಪಕ್ಷ ಹೊರತಾಗಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಮುಖ್ಯಮಂತ್ರಿಗಳು ಅವರವರ ಕಾಲದಲ್ಲಿ ಫೋನ್ ಕದ್ದಾಲಿಕೆ ಮಾಡಿಸಿರಬಹುದು. ಇದು ರಾಜಕೀಯ ವಿಚಾರ, ಆಡಳಿತಾತ್ಮಕ ಭದ್ರತಾ ವಿಚಾರ ಕ್ರೋಡೀಕರಣಕ್ಕೆ ಮಾಡುವ ಪ್ರಕ್ರಿಯೆಯಾಗಿದೆ. ಆದರೆ ಸಿಎಂ ಯಡಿಯೂರಪ್ಪ ಈ ಪ್ರಕರಣವನ್ನು ಈಗ ರಾಜಕೀಯ ಲಾಭಕ್ಕಾಗಿ ಪ್ರಕರಣ ಬಳಸುತ್ತಿದ್ದಾರೆ ಎಂದು ದೂರಿದರು.