ಪ್ರವಾಹ ಸಂತ್ರಸ್ತರ ನೆರವಿಗೆ ತನ್ನ ಜೀವಮಾನ ಗಳಿಕೆ 1 ಲಕ್ಷ ರೂ.ಗಳನ್ನು ನೀಡಿದ ಬೆಳ್ತಂಗಡಿಯ ರಿಕ್ಷಾ ಚಾಲಕ

Update: 2019-08-18 17:29 GMT

ಬೆಳ್ತಂಗಡಿ, ಆ.18: ರಿಕ್ಷಾ ಚಾಲಕರೊಬ್ಬರು ತನ್ನ ಜೀವಮಾನದ ಗಳಿಕೆಯಾದ ಒಂದು ಲಕ್ಷ ರೂ.ಗಳನ್ನು ಪ್ರವಾಹ ಪೀಡಿತರಿಗಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ನಿಡ್ಲೆ ಗ್ರಾಮದ ನಿವಾಸಿ ರಿಕ್ಷಾ ಚಾಲಕರಾಗಿರುವ ಹೊನ್ನಪ್ಪಗೌಡ ಅವರು ಪ್ರವಾಹ ಪೀಡಿತರ ನೆರವಿಗಾಗಿ ಒಂದು ಲಕ್ಷ ರೂ.ಗಳನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಚೇರಿಗೆ ಬಂದು ನೀಡಿದ್ದಾರೆ.

ಈಗಾಗಲೇ ಬೆಳ್ತಂಗಡಿಯ ಹಲವೆಡೆ ಪ್ರವಾಹ, ಭೂಕುಸಿತದಿಂದ ಅಪಾರ ಹಾನಿ ಸಂಭವಿಸಿದೆ. ಹೊನ್ನಪ್ಪ ಗೌಡರ ಈ ಮಾನವೀಯ ಸೇವೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News