ಬಂಟ್ವಾಳ: ಸಂಸ್ಕೃತ ದಿನಂ ಆಚರಣೆ

Update: 2019-08-19 17:54 GMT

ಬಂಟ್ವಾಳ, ಆ. 19: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಸಾಹಿತ್ಯ ಸಂಘ ಮತ್ತು ಮೂರ್ಕಜೆ ಮೈತ್ರೇಯಿ ಗುರುಕುಲದ ಸಹಯೋಗದೊಂದಿಗೆ ಸಂಸ್ಕೃತ ದಿನಂ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಗುರುಕುಲದ ಮಾತೃಶ್ರೀ ಪದ್ಮಾ, ಜ್ಯೋತಿ ಮತ್ತು ಪುಷ್ಪಾ ಭಾಗವಹಿಸಿದ್ದರು.

ಸಂಸ್ಕೃತ ನಿವೃತ್ತ ಅಧ್ಯಾಪಕ ಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಶ್ರೀಹರಿ ಶರ್ಮ ಮತ್ತು ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರಜೀತ್ ಸ್ವಾಗತಿಸಿ, ಅಭಿಷೇಕ್ ಭಟ್ ವಂದಿಸಿ, ಶ್ರದ್ಧಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News